ಮಸೂರ ಅವರೆ

ಫುಸಾರಿಯಮ್ ವಿಲ್ಟ್

Fusarium oxysporum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಸ್ಯ ಸೊರಗುವುದು.
  • ಎಲೆಗಳು ಹಳದಿಯಾಗುವುದು.
  • ಕಾಂಡದ ಒಳಗಡೆ ಕಂದು ಬಣ್ಣ ಅಥವಾ ಕೆಂಪು ಬಣ್ಣದ ಕಲೆಗಳು.

ಇವುಗಳಲ್ಲಿ ಸಹ ಕಾಣಬಹುದು

24 ಬೆಳೆಗಳು
ಹುರುಳಿ
ಹಾಗಲಕಾಯಿ
ಎಲೆಕೋಸು
ಕ್ಯಾನೋಲ
ಇನ್ನಷ್ಟು

ಮಸೂರ ಅವರೆ

ರೋಗಲಕ್ಷಣಗಳು

ಈ ಶಿಲೀಂಧ್ರಗಳು ಬೆಳೆ-ನಿರ್ದಿಷ್ಟ ಮಾದರಿಯ ಹಾನಿಗಳನ್ನು ತೋರಿಸುತ್ತವೆ. ಕೆಲವು ಸಂದರ್ಭಗಳಲ್ಲಿ, ಎಳೆಯ ಹಂತದಲ್ಲೇ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವ ಮೂಲಕ ಸಸ್ಯಗಳು ಬಾಡುವ ಲಕ್ಷಣಗಳನ್ನು ತೋರಿಸುತ್ತವೆ. ಬೆಳೆದ ಸಸ್ಯಗಳಲ್ಲಿ, ಸ್ವಲ್ಪ ಬಾಡುವಿಕೆಯು ಸಾಮಾನ್ಯವಾಗಿ ಸಸ್ಯಗಳ ಭಾಗಗಳಲ್ಲಿ ಕಂಡುಬರುತ್ತದೆ. ದಿನದಲ್ಲಿ ಉಷ್ಣಾಂಶ ಹೆಚ್ಚಿರುವ ಅವಧಿಗಳಲ್ಲಿ ಇದು ಅತ್ಯಂತ ಸಾಮಾನ್ಯವಾಗಿದೆ. ಎಲೆಗಳು ನಂತರ ಹಳದಿಯಾಗಲು ಆರಂಭಿಸುತ್ತವೆ. ಹೆಚ್ಚಾಗಿ ಒಂದೇ ಬದಿಯಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಕಾಂಡಗಳ ಉದ್ದ ಸೀಳುನೋಟವು ಆಂತರಿಕ ಅಂಗಾಂಶಗಳು ಕಂದು-ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ತೋರಿಸುತ್ತವೆ. ಮೊದಲು ತಳಭಾಗದಲ್ಲಿ, ನಂತರ ಕಾಂಡದ ಮೇಲೆ ಈ ಲಕ್ಷಣ ಕಾಣುತ್ತದೆ.

Recommendations

ಜೈವಿಕ ನಿಯಂತ್ರಣ

ಬ್ಯಾಕ್ಟೀರಿಯಾಗಳು ಮತ್ತು F. ಆಕ್ಸಿಸ್ಪೋರಮ್ ನ ರೋಗಕಾರಕವಲ್ಲದ ತಳಿಗಳು ಸೇರಿದಂತೆ ರೋಗಕಾರಕಗಳೊಂದಿಗೆ ಪೈಪೋಟಿ ಮಾಡಬಲ್ಲ ಹಲವು ಜೈವಿಕ ನಿಯಂತ್ರಣ ಏಜೆಂಟ್ ಗಳನ್ನು ಫುಸ್ಯಾರಿಯಮ್ ವಿಲ್ಟ್ ನಿಯಂತ್ರಣಕ್ಕೆ ಕೆಲವು ಬೆಳೆಗಳಲ್ಲಿ ಬಳಸಲಾಗುತ್ತದೆ. ಟ್ರೈಕೋಡರ್ಮಾ ವೈರಿಡೇ ಅನ್ನು (10 ಗ್ರಾಂ / ಕೆಜಿ ಬೀಜ) ಬೀಜಗಳ ಸಂಸ್ಕರಣೆಗಾಗಿ ಬಳಸಬಹುದು. ಕೆಲವು ಮಣ್ಣುಗಳು ಫ್ಯುಸ್ಯಾರಿಯಮ್ ಬೆಳವಣಿಗೆಯನ್ನು ನಿಗ್ರಹಿಸುತ್ತದೆ. ಮಣ್ಣಿನ pH ಅನ್ನು 6.5-7.0 ಗೆ ಹೊಂದಿಸುವುದು ಮತ್ತು ಅಮೋನಿಯಮ್ ಬದಲಿಗೆ ನೈಟ್ರೇಟ್ ಅನ್ನು ನೈಟ್ರೋಜನ್ ಮೂಲವಾಗಿ ಬಳಸುವುದರಿಂದ ಈ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಸೇರಿರುವ ಸಮಗ್ರವಾದ ಮಾರ್ಗವನ್ನು ಮೊದಲು ಪರಿಗಣಿಸಿ. ಯಾವುದೇ ಕ್ರಮಗಳು ಪರಿಣಾಮಕಾರಿಯಾಗಿಲ್ಲದಿದ್ದರೆ ಸೋಂಕಿತ ಸ್ಥಳಗಳಲ್ಲಿ ಮಣ್ಣು-ಆಧಾರಿತ ಶಿಲೀಂಧ್ರನಾಶಕಗಳನ್ನು ಹಾಕಿ. ಬಿತ್ತನೆ/ನಾಟಿ ಮಾಡುವ ಮೊದಲು 3 ಗ್ರಾಂ/ಲೀ ನೀರಿನಷ್ಟು ತಾಮ್ರದ ಆಕ್ಸಿಕ್ಲೋರೈಡ್ ನಲ್ಲಿ ಮಣ್ಣನ್ನು ನೆನೆಸುವುದು ಸಹ ಪರಿಣಾಮಕಾರಿಯಾಗಿರುತ್ತದೆ.

ಅದಕ್ಕೆ ಏನು ಕಾರಣ

ಫ್ಯುಸಾರಿಯಮ್ ವಿಲ್ಟ್ ಸಸ್ಯಗಳ ಸಾರಿಗೆ ಅಂಗಾಂಶಗಳಲ್ಲಿ ಬೆಳೆಯುತ್ತದೆ ಮತ್ತು ಇದು ನೀರಿನ ಮತ್ತು ಪೌಷ್ಟಿಕಾಂಶದ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ. ಸಸ್ಯಗಳು ನೇರವಾಗಿ ಅವುಗಳ ಬೇರುಗಳ ಮೂಲಕ ಅಥವಾ ಬೇರುಗಳಲ್ಲಿರುವ ಗಾಯಗಳ ಮೂಲಕ ಸೋಂಕಿಗೆ ಒಳಗಾಗಬಹುದು. ರೋಗಕಾರಕವು ಒಮ್ಮೆ ಯಾವುದಾದರೂ ಸ್ಥಳದಲ್ಲಿ ಸ್ಥಾಪಿತವಾದರೆ, ಅದು ಹಲವು ವರ್ಷಗಳವರೆಗೆ ಅಲ್ಲಿ ಸಕ್ರಿಯವಾಗಿ ಇರುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ಮಣ್ಣಿನ pH ಅನ್ನು 6.5-7.0 ಗೆ ಹೊಂದಿಸಿ ಮತ್ತು ಸಾರಜನಕ ಮೂಲವಾಗಿ ನೈಟ್ರೇಟ್ ಅನ್ನು ಬಳಸಿ.
  • ಹೊಲವನ್ನು ರೋಗಲಕ್ಷಣಕ್ಕಾಗಿ ಪರಿಶೀಲಿಸಿ.
  • ಸೋಂಕಿತ ಸಸ್ಯಗಳನ್ನು ಪರಿಶೀಲಿಸಿ ಮತ್ತು ತೆಗೆದುಹಾಕಿ.
  • ನಿಮ್ಮ ಸಲಕರಣೆಗಳನ್ನು ಸ್ವಚ್ಛವಾಗಿರಿಸಿ.
  • ಅದರಲ್ಲೂ ಮುಖ್ಯವಾಗಿ ವಿವಿಧ ಗದ್ದೆಗಳ ನಡುವೆ ಕೆಲಸ ಮಾಡುವಾಗ.
  • ಗದ್ದೆ ಕೆಲಸ ಮಾಡುವಾಗ ಸಸ್ಯಗಳಿಗೆ ಗಾಯವಾಗುವುದನ್ನು ತಪ್ಪಿಸಿ.
  • ಶಿಫಾರಸು ಮಾಡಿದ ಪ್ರಮಾಣದ ಪೊಟಾಶ್ ರಸಗೊಬ್ಬರಗಳನ್ನು ಬಳಸಿ.
  • ಸಂತುಲಿತ ರಸಗೊಬ್ಬರ ಬಳಕೆ ಮಾಡಿ.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳನ್ನು ಉತ್ತು ತೆಗಿಯಿರಿ ಮತ್ತು ಸುಟ್ಟು ಬಿಡಿ.
  • ಶಿಲೀಂಧ್ರವನ್ನು ಕೊಲ್ಲಲು ತಿಂಗಳುಗಳ ಕಾಲ ಸೋಂಕಿತ ಪ್ರದೇಶವನ್ನು ಭಾರೀ ಬಿಸಿಲಿರುವಾಗ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಮುಚ್ಚಿ.
  • 5-7 ವರ್ಷಗಳವರೆಗೆ ಸರದಿ ಬೆಳೆ ವ್ಯವಸ್ಥೆ ಅನುಸರಿಸಿದರೆ ಮಣ್ಣಿನಲ್ಲಿರುವ ಶಿಲೀಂಧ್ರಗಳ ಮಟ್ಟವನ್ನು ಕಡಿಮೆ ಮಾಡಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ